ಪಂಚ ಕನ್ಯೆಯರು

ಬ್ರಿಟೀಷ್ ಏರ್‌ವೇಸ್ ಪಯಣ
ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ;
ಇವರು ಪಂಚಕನ್ಯೆಯರೆ…..
ಹಾಗೆಂದೇ ಕರೆಯುತ್ತಿದ್ದಾರೆ ಸಹ
ಭಾರತೀಯ ಪಯಣಿಗರು. ಜೊತೆಗೆ
ಹಸಿರು ಕಣ್ಣಿನ ಕೆಂಪು ತುಟಿಯ
ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು.

ತೂಗುಬಿಟ್ಟ ಗೊಂಡೆಜಡೆ, ಎತ್ತಿ ಕಟ್ಟಿದ
ಕೂದಲಗಂಟು ಸುತ್ತಲೂ ಮಲ್ಲಿಗೆ ಮಾಲೆ
ಶಂಕಚಕ್ರ ಚಿಪ್ಪು ಮಣಿ ಹವಳ
ರುದ್ರಾಕ್ಷಿ ತಾಯಿತ ಕರಿಮಣಿಗಳ ಸರಗಳು
ಕತ್ತಿಗೆ ಭಾರವಾದರೂ ಸಂತೋಷಿಸುವ ರೀತಿ

ಕೊಲ್ಹಾಪೂರಿ ಚಪ್ಪಲಿ, ಬಣ್ಣಬಣ್ಣದ
ಹಾವು ಚೇಳಿನ ಅಂದದ ಕುಂಕುಮ ಬಿಂದಿಗಳು
ಕೈತುಂಬಾ ಗಾಜಿನ ಬಳೆ, ಕಾಲಿಗೆ ಗೆಜ್ಜೆ, ಮೂಗಿಗೆ ನತ್ತು
ಚೂಡಿದಾರ್‍, ಗಾಗರಾಚೋಲಿ, ಮಿಂಚು ಮಿಂಚಿನ
ಟೀಶರ್ಟ್, ಲಾಲ್ ದುಪ್ಪಟ್ಟಾ
ಹತ್ತಾರು ಹಿಂದಿ ಮಾತು ಕಥೆ ಹಾಡು
(ಹವಾಮೆ ಉಡತೆ ಜಾಯೆ ಮೇರೆ ಲಾಲದುಪಟ್ಟಾ
ಮಲ್ ಮಲ್ ಜಿಹೋ ಜೀ….)

ಇತಿಹಾಸ ಓದಿ ಕೇಳಿ ಬಂದ
ಇಂಗ್ಲೆಂಡ್ ಹುಡುಗಿಯರ ಭಾರತ ಪ್ರವಾಸ
ಕಂಡದ್ದೆಲ್ಲಾ ಕೊಂಡು ನೋಡಿದ ಪ್ರೀತಿ

ಇಡೀ ದೇಶಸುತ್ತಿ ಮೋಜು ಮಜ
ಮಾಡಿದಿರಾ? ಕುಟುಕಿದ್ದಕ್ಕೆ
ಸಂಶೋಧನಾ ವಿದ್ಯಾರ್ಥಿನಿಯರ
“ಸಂಸ್ಕೃತಿ ಅಧ್ಯಯನ” ಪರಿ ಬಿಡಿಬಿಡಿಸಿ
ಹೇಳಿದಂತೆ
ಕುತೂಹಲದ ಬಿಳಿಯ ಬ್ರಿಟೀಷರು
ಸುತ್ತಿ ಸುತ್ತಿ ಕಪ್ಪಾಗಿ ಮುಖತುಂಬ ಬೊಬ್ಬೆದ್ದ
ಪಂಚಕನ್ಯೆಯರನು ತಬ್ಬಿ
“ನಮ್ಮ ಹುಡುಗಿಯರ ಸಾಧನೆ” ಎಂದಾಗ
ಪೆಚ್ಚಾದ ಭಾರತೀಯ ಪಯಣಿಗರ ಮುಖ
ಮಂಗನಂತಾಗಿದ್ದೊಂದು ಬಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂತ್ರಧಾರ
Next post ಕ್ಷಣ – ೨

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys